ಶುಕ್ರವಾರ, ಜೂನ್ 10, 2011

ಬಾನಿನಿಂದ ಬುವಿಗೆ

ಹಕ್ಕಿಯಾಗುವ ಆಸೆ ಹೊತ್ತು
ಬ್ರಹ್ಮನ ಮುಂದೆ ನಿಂತೆ..
ಅವ ನನ್ನ
ಪುಕ್ಕ ಕಿತ್ತು,
ರೆಕ್ಕೆ ಕತ್ತರಿಸಿ,,,
ಗಗನದಿ ಹಾರಿ ನಲಿದಾಡುವ
ನನ್ನ ಕನಸನು ಸುಟ್ಟು,,,,
ಮಣ್ಣಿಗೆ ಮುತ್ತಿಕ್ಕು
ಎಂಬ ಶಾಪವನಿತ್ತ ........


ಗುರುವಾರ, ಜೂನ್ 2, 2011

ಶಿಬಿರ ದಲ್ಲಿ ೧೫ ದಿನ

ಯಾವುದಾದ್ರೂ ಒಂದು ಟಾಪಿಕ್ ಇಟ್ಟುಕೊಂಡು ಚೆನ್ನಾಗಿ ಬರಿಯೋಣ ಅಂತ ಮಾಡ್ದ್ರೆ ಸುಟ್ಟದ್ದು ..ಒಂದು ಅಕ್ಷರನೂ ಬರಿಲಿಕ್ಕೆ ಆಗ್ತಾ ಇಲ್ಲ..ಇಗ ಪರೀಕ್ಷೆ ಗಳೆಲ್ಲ ಮುಗಿದಿದೆ..ರಿಸಲ್ಟ್ ಕೂಡ ಬಂದಿದೆ
.. ಸೊ ..ಸಂ ವಾಟ್ ಫ್ರೀ ..
 ಮತ್ತೆ ಆ ಪರೀಕ್ಷೆ ಗಿರೀಕ್ಷೆ ಅಂತ ತಲೆ ತಿನ್ನೋಲ್ಲ ಮಾರಾಯ್ರೆ.. ಹೆದರಬೇಡಿ..

ನಾನು ನನ್ನ  cet ಪರೀಕ್ಷೆ ಮುಗಿದ ಮೇಲೆ ಒಂದು ಶಿಬಿರಕ್ಕೆ ಹೋಗಿದ್ದೆ,, ಕುಮಾರಿ ಸಂಸ್ಕ್ರತಿ ಶಿಬಿರ . ಸ್ವರ್ಣವಲ್ಲಿ ಮಠದವರು ಆಯೋಜಿಸಿದ್ದು,,, ಹೇಗೂ ಎಕ್ಷಮ ಮುಗಿದಿದೆ;,, ನಿಜ  ಅಂದ್ರೆ ,ರಿಸಲ್ಟ್ ಬರೋ ಸಮಯದಲ್ಲಿ ಮನೇಲಿ ಇರೋದನ್ನ ನಂಗೆ ತಪ್ಪಿಸಿಕೊಳ್ಳಬೇಕಿತ್ತು.ಆದ್ದರಿಂದ ನನ್ನ ಗೆಳತಿಯೊಬ್ಬಳು ಹೀಗೊಂದು ಶಿಬಿರ ಇದೆ ಅಂತ ಹೇಳಿದಾಗ ನಾನು ಹಿಂದೆ ಮುಂದೆ ಯೋಚಿಸದೆ ಎಸ್ ಅಂತ ಹೇಳಿದೆ,,

ಆಯ್ತು ಸರಿ.. ಅವರು ಹೇಳಿದ ದಿನ ಯಡಳ್ಳಿ ಕಾಲೇಜ್ ಗೆ ಹೋದೆ.
.ಅಲ್ಲಿ ಕೇವಲ ೯ ಜನ ಬಂದಿದ್ರು,, ಹಿಂದಿನ ವರ್ಷಕ್ಕೆಲ್ಲ ಹೋಲಿಸಿದರೆ ತುಂಬಾ ಕಡಿಮೆ ಅಂತ ಶಿಬಿರ ಮುಖ್ಯಸ್ಥೆ ಹೇಳ್ತಾ ಇದ್ರು .. ಸಂಜೆ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ಗಳು ಬಂದು ಶಿಬಿರದ ಉಧ್ಘಾಟನೆ ಮಾಡಿದರು..
ಮರುದಿನ ದಿಂದ ಶುರುವಾಯ್ತು ನಮ್ಮ ದಿನಚರಿ.. ಸೂರ್ಯವಂಶ ದವಳಾಗಿದ್ದ ನಾನು ಸೂರ್ಯ ಹುಟ್ಟುವ ಮುಂಚೆ ಏಳಬೇಕಿತ್ತು ,!!,  ೫ ಗಂಟೆಗೆ ಎಬ್ಬಿಸಿ ಪ್ರಾತ ಸ್ಮರಣೆ ಮಾಡಿಸ್ತಾ ಇದ್ದರು,,  ಅದರ ನಂತರ  ಧ್ಯಾನ,,,!! ಆಗಲೇ ಚೆನ್ನಾಗಿ ನಿದ್ದೆ ಮಾಡ್ತಾ ಇದ್ದೆ ಅಂತ ಬೇರೆ ಹೇಳಬೇಕಿಲ್ಲ ಅಲ್ವ?!!
ಧ್ಯಾನ ದ ನಂತರ ಯೋಗಾಸನ,, ಇದು ನನಗೆ ತುಂಬಾ ಹಿಡಿಸಿತು..ಅದೆಷ್ಟು ಸರಳವಾಗಿ ನಮಗೆ ಕಷ್ಟ ಕಷ್ಟ ವಾದ ಯೋಗಾಸನ ಹೇಳಿಕೊಡ್ತ ಇದ್ರು..
ಇರುವವರು ಕೇವಲ ೯ ಜನ ಆಗಿದ್ದಕ್ಕೆ ನಮಗೆ ಸ್ನಾನ ತಿಂಡಿ ಊಟ ಕ್ಕೆಲ್ಲ ಗಡಿಬಿಡಿ ಆಗಲಿಲ್ಲ.. ಆದ್ರೆ ಕೆಲಸ ಸ್ವಲ್ಪ ಜಾಸ್ತಿ ಆಗ್ತಾ ಇತ್ತು.. ಅಷ್ಟೇ..
ತಿಂಡಿ ಆದಮೇಲೆ ಕರಕುಶಲ ಹೇಳಿ ಕೊಡ್ತಿದ್ರು,, ಸ್ತೋತ್ರ ದೇಶಭಕ್ತಿಗೀತೆಗಳು ಸಾಂಪ್ರದಾಯಿಕ ಗೀತೆಗಳು ಹೀಗೆ ತುಂಬಾ ಹಾಡುಗಳನ್ನ ಹೇಳಿ ಕೊಟ್ಟಿದಾರೆ.. ಯಾವುದೇ ಹಬ್ಬ ಹರಿದಿನಗಳಲ್ಲಿ ಇನ್ನು ಹಾಡಿಗೋಸ್ಕರ ತಡಕಾಡುವ ಪ್ರಸಂಗ ಬರೋದಿಲ್ಲ ಅಷ್ಟೊಂದು ಹಾಡುಗಳನ್ನ ಹೇಳಿಕೊಟ್ಟಿದಾರೆ...
ಅದು ಆದ ಮೇಲೆ ಉಪನ್ಯಾಸ ಇರ್ತಇತ್ತು..ಭಾರತೀಯ ಸಂಸ್ಕ್ರತಿ ಪರಂಪರೆ ಮುಂತಾದ ವಿಷಯಗಳ ಬಗ್ಗೆ ಮಾತನಾಡಲಿಕ್ಕೆ
ದೊಡ್ಡ ದೊಡ್ಡ ವಿದ್ವಾಂಸರು ಬರ್ತಾಇದ್ರು.ಕೆಲವೊಂದುನಮಗೆ ಬೋರ್ ಬರುವ ವಿಷಯ ಗಳು ಇದ್ವು,, ಆದ್ರೆ ನಮ್ಮ ಸಂಸ್ಕ್ರತಿಯ ಬಗ್ಗೆ ನಾವಲ್ಲದೆ ಇನ್ಯಾರು ತಿಳಿದುಕೊಳ್ತಾರೆ? ನಾವೇ ಈ ಬಗ್ಗೆ ಅಸಡ್ಡೆ ತೋರಸ್ತ ಇರೋದು ಸರೀನಾ? ಅಂತ ಯೋಚನೆ ಮಾಡಿದಾಗ ಯಾವ ವಿಷಯ ಕೂಡ ಬೋರ್ ಹೊಡಿಸಲಿಲ್ಲ..
 ಸಂಜೆ ಆಟಕ್ಕೆ ಬಿಡ್ತಾ ಇದ್ರು..
ನಾವು ೯ ಜನ ಮನೆ ಮಕ್ಕಳ ಥರ ಆಗಿಬಿಟ್ಟ್ದ್ವಿ... ಕನ್ನಡ ಶಾಲೇಲಿ ಆಡ್ತಾ  ಇದ್ದ ಬೆಟ್ಟೆ ಆಟ, ಕಣ್ಣಾಮುಚ್ಚಾಲೆ ಎಲ್ಲ ಆಟ ಅಡ್ತ ಇದ್ವಿ...
ಸಂಜೆ ಕಾಲು ಮುಖ ತೊಳೆದುಕೊಂಡು ಭಗವದ್ಗೀತೆ., ಲಲಿತ ಸಹಸ್ರನಾಮ ,ಭಜನೆ  ಎಲ್ಲ ಹೇಳಬೇಕಿತ್ತು... ನಂತರ ಯಶೋದಕ್ಕನ ಕಥೆ !!!... its  wonderful .. ಅಧ್ಭುತ...!! ತುಂಬಾ ಚೆನ್ನಾಗಿ ರಾಮಾಯಣ ಮಹಾಭಾರತ ದ ಕಥೆಗಳು ಮಹಾನ್ ತಪಸ್ವಿಗಳ ಕಥೆ ಹೇಳ್ತಾ ಇದ್ರು,,,ಅಬ್ಬ..  ಒಂದು ರೀತಿ ಆಧ್ಯಾತ್ಮದ ಲೋಕದಲ್ಲಿ ಕರೆದುಕೊಂಡು ಹೋದ ಅನುಭವ..
ಹಾ ಇನ್ನೊಂದು ವಿಷಯ ಹೇಳಲೇ ಬೇಕು,,, ರಾತ್ರಿ ಊಟ ಆದ ಮೇಲೆ ಪ್ರತಿಭಾ ಪ್ರದರ್ಶನ ಇರ್ತ ಇತ್ತು..ನಾನು ಪ್ರಬಂಧ ಬರೀತೀನಿ,, ಚಿತ್ರ ಬಿಡಿಸ್ತೀನಿ,, ಆದ್ರೆ stage  ಮೇಲೆ ನಿತ್ಕೊಂಡು ಭಾಷಣ ಮಾಡೋದು, ಹಾಡು ಹೇಳೂದು ಅಂದ್ರೆ ಜೀವಾನೇ ಬಾಯಿಗೆ ಬಂದ ಹಾಗೆ ಆಗುತ್ತೆ,,ಅಷ್ಟೊಂದು ಹೆದರಿಕೆ,, ಯಾಕೋ ಏನೋ ಇಲ್ಲಿ ಮಾತ್ರ ಹಾಗೆ ಆಗಲೇ ಇಲ್ಲ.. ನಾನು ಹಾಡು ಹೇಳಿದೆ ,ಏಕಪಾತ್ರಾಭಿನಯ, ಚಧ್ಮವೇಶ., ನೃತ್ಯ ಮಾಡಿದೆ.. ಕೊನೆಯ ದಿನ ನಾವೆಲ್ಲರೂ ಸೇರಿ ರಾಮಾಯಣದ ನಾಟಕ ಕೂಡ ಮಾಡಿದ್ವಿ... ಆ ನಾಟಕ ಕ್ಕೆ ಸ್ಕ್ರಿಪ್ಟ್ ಬರೆದವಳು ನಾನೇ.. ಇದನ್ನ ಕೊಚ್ಚಿಕೊಳ್ಳಬೇಕು ಅಂತ ಬರೀತಾ ಇಲ್ಲ ,, ಇ ವೇದಿಕೆ ನನ್ನ ಆತ್ಮ ವಿಶ್ವಾಸ ಹೆಚ್ಚಿಸಲು ಯಾವ ರೀತಿಯಲ್ಲಿ ಸಹಾಯ ಮಾಡಿದೆ ಅಂತ ತಿಳಿಸ್ತ ಇದ್ದೀನಿ ಅಷ್ಟೇ,,
 ಆ ೧೫ ದಿನಗಳನ್ನ ನಾನು ಟೀವಿ ನೂಡುವುದರಲ್ಲೋ ,ನೆಟ್ ನಲ್ಲಿ ಚಾಟ್ ಮಾಡುವುದರಲ್ಲೋ, ಅತ್ತೆ ಮನೆ, ಅಜ್ಜಿ ಮನೆ  ತಿರಗುತ್ತಾ ,ಮನೆಯಲ್ಲಿ ಅಮ್ಮನಿಗೆ ಕಾಟ ಕೊಡ್ತಾ ಕಳಿಯುತ್ತಿದ್ದೆ . ಅದೇ ೧೫ ದಿನಗಳನ್ನ ಇಷ್ಟೊಂದು ಉಪಯುಕ್ತ ವಾಗಿ ಕಳಿಯಲು ಸಾಧ್ಯ ಮಾಡಿಸಿ ಕೊಟ್ಟಂಥಹ ನನ್ನ ಆ ಗೆಳತಿಗೆ ತುಂಬು ಹೃದಯದ ಧನ್ಯವಾದಗಳು..

ನಮ್ಮ ಸಂಸೃತಿಯ ಉಳಿವಿಗೆ ಮಠದವರು ಮಾಡುತ್ತಿರುವ ಪ್ರಯತ್ನಕ್ಕೆ ನಮ್ಮ ಸಹಕಾರ ನೀಡೋಣ ,,